ADVERTISEMENT

ಅನಂತಮೂರ್ತಿ ಅವರಿಗೆ ಬಷೀರ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 10:50 IST
Last Updated 5 ಜುಲೈ 2012, 10:50 IST

ಕೊಜಿಕೋಡ್ :  ಜ್ಞಾನಪೀಠಪ್ರಶಸ್ತಿ ಪುರಸ್ಕೃತ ಸಾಹಿತಿ  ಹಾಗೂ ಹಾಗೂ ಶಿಕ್ಷಣ ತಜ್ಞ ಯು.ಆರ್. ಅನಂತಮೂರ್ತಿ ಅವರಿಗೆ 18ನೇ ಬಷೀರ್ ಪ್ರಶಸ್ತಿ ಲಭಿಸಿದೆ.

ಕೊಲ್ಲಿ ರಾಷ್ಟ್ರಗಳಲ್ಲಿರುವ ಮಲೆಯಾಳಿಗಳ  ಸಾಂಸ್ಕೃತಿಕ ಸಂಘಟನೆ ~ಪ್ರವಾಸಿ ದೋಹಾ~ ನೀಡುತ್ತಿದೆ. ಪರಂಪರೆ ಜೊತೆಗಿನ ನಿರಂತರ ಸಂಘರ್ಷವನ್ನು ತಮ್ಮ ಸಾಹಿತ್ಯದಲ್ಲಿ ಅಭಿವ್ಯಕ್ತಿಸಿರುವ ಅನಂತಮೂರ್ತಿ ಪಾಶ್ಚಾತ್ಯ ಸಂಸ್ಕೃತಿಯನ್ನು ಆಧುನಿಕತೆಯ ಹೆಸರಿನಲ್ಲಿ ಕುರುಡಾಗಿ ಅನುಕರಿಸುವವರಿಂದಲೂ ಭಿನ್ನರಾಗಿದ್ದಾರೆ.  ಅವರು ಭಾರತೀಯ ಸಂಸ್ಕೃತಿಯ ಬಹುತ್ವವನ್ನು ಒಂದು ವಾಸ್ತವ ಎಂದು ಪರಿಗಣಿಸಿರುವ ಲೇಖಕ ಎಂದು ಆಯ್ಕೆ ಸಮಿತಿಯಲ್ಲಿ ಒಬ್ಬರಾದ ಎಂ.ಟಿ. ವಾಸುದೇವನ್ ನಾಯರ್ ತಿಳಿಸಿದರು.

ಯು 50 ಸಾವಿರ ನಗದು ಹಾಗೂ ಖ್ಯಾತ ಕಲಾವಿದ ನಂಬೂದರಿ ಅವರಿಂದ ರಚಿತವಾದ ಕಲಾಕೃತಿಯನ್ನು ಒಳಗೊಂಡಿದೆ.

ವೈಕಂ ಮಹಮದ್ ಬಷೀರ್ ಅವರನ್ನು ಜಗತ್ತಿನ ಬೇರೆ ಬೇರೆ ದೇಶಗಳಿಗೆ ಪರಿಚಯಿಸುವುದರಲ್ಲಿ ಅನಂತಮೂರ್ತಿ ಅವರ ಪಾತ್ರ ಮುಖ್ಯ ಎಂದು ಆಯ್ಕೆ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.