ADVERTISEMENT

ಅಯಸ್ಕಾಂತ ಕದ್ದನೆಂದು ಹೊಡೆದು ಕೊಂದರು

#GujaratIsNotSafe4Dalits ಜಿಗ್ನೇಶ್‌ ಮೇವಾನಿ ಟ್ವಿಟ್

ಏಜೆನ್ಸೀಸ್
Published 21 ಮೇ 2018, 12:11 IST
Last Updated 21 ಮೇ 2018, 12:11 IST
ಚಿತ್ರ ಕೃಪೆ – ಟ್ವಿಟರ್
ಚಿತ್ರ ಕೃಪೆ – ಟ್ವಿಟರ್   

ಅಹಮದಾಬಾದ್: ಕಳ್ಳತನದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ಈ ಕುರಿತು ವಡ್‌ಗಾಂ ಶಾಸಕ ಜಿಗ್ನೇಶ್ ಮೇವಾನಿ ಅವರು ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಮೃತರನ್ನು ಮುಕೇಶ್‌ ವಾನಿಯಾ ಎಂದು ಗುರುತಿಸಲಾಗಿದೆ. ಅವರ ಪತ್ನಿಯ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ADVERTISEMENT

‘ಹಿಂದುಳಿದ ಜಾತಿಗೆ ಸೇರಿದ ಮುಕೇಶ್‌ ವಾನಿಯಾ ಅವರನ್ನು ಫ್ಯಾಕ್ಟರಿ ಮಾಲೀಕರು ರಾಜ್‌ಕೋಟ್‌ನಲ್ಲಿ ಶೋಚನೀಯವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಅವರ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ.’ #GujaratIsNotSafe4Dalits ಎಂಬ ಹ್ಯಾಷ್‌ಟ್ಯಾಗ್‌ ಜತೆ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.