
ಪ್ರಜಾವಾಣಿ ವಾರ್ತೆಇಟಾನಗರ (ಪಿಟಿಐ): ಎರಡು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಗ್ರಾಮೀಣ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೊಲಿ ನ್ಯೂಡು ಅವರನ್ನು ಅಪರಿಚಿತರು ಅಪಹರಿಸಿದ್ದಾರೆ.
ಡೊಲಿ ನ್ಯೂಡು ಅವರನ್ನು ಅಧಿಕೃತ ನಿವಾಸದಿಂದ ಅಪಹರಿಸಲಾಗಿದೆ. ಅವರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ ‘ಮಾನವೀಯ ನೆಲೆಯಲ್ಲಿ ನ್ಯೂಡು ಅವರನ್ನು ಬಿಡುಗಡೆ ಮಾಡುವಂತೆ’ ಮುಖ್ಯಮಂತ್ರಿ ನಬಂ ಟುಕಿ ಅಪಹರಣಕಾರರಲ್ಲಿ ಮನವಿ ಮಾಡಿದ್ದಾರೆ. ಪತ್ತೆ ಕಾರ್ಯವನ್ನು ಚುರುಕುಗೊಳಿಸುವಂತೆ ಟುಕಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳೂ ನ್ಯೂಡು ಅವರನ್ನು ಬಿಡುಗಡೆಗೆ ಮನವಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.