ಧುಬ್ರಿ (ಅಸ್ಸಾಂ) (ಪಿಟಿಐ): ಅಸ್ಸಾಮಿನ ಧುಬ್ರಿ ಜಿಲ್ಲೆಯಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ನಾಡದೋಣಿಯೊಂದು ಭಾನುವಾರ ಬೆಳಗ್ಗೆ ಮಗುಚಿದ್ದು, ನದಿಗೆ ಬಿದ್ದ 12 ಮಂದಿಯನ್ನು ರಕ್ಷಿಸಲಾಯಿತು. ಒಬ್ಬ ವ್ಯಕ್ತಿ ಕಣ್ಮರೆಯಾಗಿದ್ದಾನೆ. ಭಾರತ - ಬಾಂಗ್ಲಾದೇಶ ಗಡಿಗೆ ಸಮೀಪ ಈ ದುರಂತ ಸಂಭವಿಸಿತು.
ಭಾರತ-ಬಾಂಗ್ಲಾದೇಶ ಗಡಿಗೆ ಸಮೀಪದ ಮಣಕ್ಚಾರ್ ಬಳಿಯ ಶುಖ್ ಚಾರ್ ನಲ್ಲಿ ಈ ದುರಂತ ಸಂಭವಿಸಿತು. ದುರಂತದಲ್ಲಿ ಸಿಲುಕಿದ 12 ಮಂದಿಯನ್ನು ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಡಮ್ತಲಿಯಿಂದ ಅತುಂಡ್ ಚಾರ್ ಕಡೆಗೆ ಹೊರಟಿದ್ದ ದೋಣಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮರಳಿನ ಅಡ್ಡೆಗೆ ಡಿಕ್ಕಿ ಹೊಡೆದು ಮಗುಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.