ADVERTISEMENT

ಆಟೊದಲ್ಲಿ ಪ್ರಯಾಣ, ರೈಲಿನಲ್ಲಿ ಸಂವಾದ

ಚುನಾವಣಾ ಪ್ರಚಾರಕ್ಕಾಗಿ ಕೇಜ್ರಿವಾಲ್‌ ವಿನೂತನ ತಂತ್ರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಮುಂಬೈ(ಐಎಎನ್‌ಎಸ್‌): ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್, ಲೋಕಸಭಾ ಚುನಾವಣೆ ಪ್ರಚಾರಕ್ಕೆ ವಿನೂತನ ಮಾರ್ಗಗಳನ್ನು ಆರಂಭಿಸಲಿದ್ದಾರೆ.

ಸಾರ್ವಜನಿಕ ಸಾರಿಗೆ ಹಾಗೂ ಆಟೊ ಬಳಸಿ ಕೇಜ್ರಿವಾಲ್‌ ಬುಧ­ವಾರ­ದಿಂದ ಪ್ರಚಾರ ಆರಂಭಿಸಲಿದ್ದಾರೆ.

ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿ­ಯುವ ಮಾಜಿ ಮುಖ್ಯಮಂತ್ರಿ, ಆಟೊ ವೊಂದರಲ್ಲಿ ಅಂಧೇರಿ ರೈಲು ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಇಲ್ಲಿಂದ ಚರ್ಚ್‌ ಗೇಟ್‌­ವರೆಗೆ ರೈಲಿನಲ್ಲಿ ಪ್ರಯಾಣಿಸುವ ಅವರು 40 ನಿಮಿಷ ಪ್ರಯಾ­ಣಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಚರ್ಚ್‌ಗೇಟ್‌ ನಿಲ್ದಾಣದಲ್ಲಿ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಮೀರಾ ಸನ್ಯಾಲ್‌ ಕೇಜ್ರಿ ವಾಲ್‌ ಅವರನ್ನು ಸ್ವಾಗತಿಸ­ಲಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಅವರು, ಕ್ರಾಂತಿ ಮೈದಾನ­ದಿಂದ ಖಿಲಾ ಫತ್‌ ಹೌಸ್‌ವರೆಗೆ ಎರಡು ಗಂಟೆ ರೋಡ್‌ ಶೋ ನಡೆಸಲಿದ್ದಾರೆ.

ಕೇಜ್ರಿವಾಲ್‌ ಔತಣಕೂಟಕ್ಕೆ 10 ಸಾವಿರ: ಅರವಿಂದ ಕೇಜ್ರಿ ವಾಲ್‌ ಜತೆ ಇಲ್ಲಿನ ಸಾದಾರ್‌ನಲ್ಲಿ ರುವ ಐಷಾರಾಮಿ ಹೋಟೆಲ್‌ನಲ್ಲಿ ಔತಣಕೂಟ ದಲ್ಲಿ ಭಾಗವಹಿಸಬೇಕೇ? ಹಾಗಾದರೆ ಇದಕ್ಕೆ ಪ್ರತಿಯೊಬ್ಬರೂ ₨10,000 ನೀಡಬೇಕು.  ಆಮ್‌ ಆದ್ಮಿ ಪಕ್ಷ ದೇಣಿಗೆ ಸಂಗ್ರಹಕ್ಕಾಗಿ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಪಕ್ಷದ ಈ ತಂತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿರುವ ವಕ್ತಾರ ಪ್ರಜಾಕ್ತು ಅತುಲ್‌ , ಸುಮಾರು 150 ರಿಂದ 200 ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಂದ ಹಾಗೆ , ಇದೇ 15 ರಂದು ಕೇಜ್ರಿವಾಲ್‌ ಬೆಂಗಳೂರಿನಲ್ಲಿ ಆಯೋಜಿಸಿರುವ ಔತಣಕೂಟಕ್ಕೆ ₨20 ಸಾವಿರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.