ADVERTISEMENT

ಆದಾಯ ತೆರಿಗೆ ಮಿತಿ ₨5 ಲಕ್ಷಕ್ಕೆ

ಎಐಎಡಿಎಂಕೆ ಪ್ರಣಾಳಿಕೆ ಬಿಡುಗಡೆ: ಭರವಸೆ ಭರಪೂರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2014, 19:30 IST
Last Updated 25 ಫೆಬ್ರುವರಿ 2014, 19:30 IST
ಆದಾಯ ತೆರಿಗೆ ಮಿತಿ ₨5 ಲಕ್ಷಕ್ಕೆ
ಆದಾಯ ತೆರಿಗೆ ಮಿತಿ ₨5 ಲಕ್ಷಕ್ಕೆ   

ಚೆನ್ನೈ (ಪಿಟಿಐ): ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಹೊಸ­ದಾಗಿ ರಚನೆಯಾಗುವ ಸರ್ಕಾರ­ದಲ್ಲಿ ಭಾಗಿಯಾದರೆ ಆದಾಯ ತೆರಿಗೆ ಮಿತಿ­ಯನ್ನು ಐದು ಲಕ್ಷ ರೂಪಾಯಿ­ಗಳಿಗೆ ಏರಿಸುವ ಭರವಸೆಯನ್ನು ಎಐಎಡಿಎಂಕೆ ನೀಡಿದೆ.

ಎಐಎಡಿಎಂಕೆ ಚುನಾವಣೆ ಪ್ರಣಾಳಿಕೆ­ಯನ್ನು ಮುಖ್ಯ ಮಂತ್ರಿ ಜಯಲಲಿತಾ ಮಂಗಳವಾರ ಬಿಡುಗಡೆ ಮಾಡಿದರು. ಜಯಲಲಿತಾ ಅವರು ಪ್ರಧಾನಿ ಹುದ್ದೆ­ಗೇರಬೇಕು ಎಂದು ಬಯಸಿರುವ ಪಕ್ಷವು ರಾಷ್ಟ್ರದ ಮತದಾರರನ್ನು ಗಮನ­ದಲ್ಲಿ ಇಟ್ಟುಕೊಂಡು ಪ್ರಣಾಳಿಕೆ­ಯನ್ನು ಸಿದ್ಧಪಡಿಸಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ನಿಗದಿ ಅಧಿಕಾರವನ್ನು ತೈಲ ಕಂಪೆನಿ­ಯಿಂದ ವಾಪಸ್ ಪಡೆಯುವ ಭರವಸೆ­ಯೂ ಪ್ರಣಾಳಿಕೆಯಲ್ಲಿ ಸೇರಿದೆ. ತಮಿಳುನಾಡಿನಲ್ಲಿ ಈಗಾಗಲೇ ಜಾರಿ­ಯಲ್ಲಿ ಇರುವ ಜನಪ್ರಿಯ ಯೋಜನೆ­ಗಳಾದ  ಮಿಕ್ಸಿ, ಗ್ರೈಂಡರ್, ಫ್ಯಾನ್‌, ಹಾಲು ಕರೆಯುವ ಹಸು ಮತ್ತು ಮೇಕೆ­ಗಳನ್ನು ಉಚಿತವಾಗಿ ವಿತರಿಸುವ ಕಾರ್ಯ­ಕ್ರಮ­ಗಳನ್ನು ದೇಶದಾದ್ಯಂತ ವಿಸ್ತರಿ­ಸುವ ಭರವಸೆ ನೀಡಲಾಗಿದೆ.
ನನೆಗುದಿಯಲ್ಲಿ ಬಿದ್ದಿರುವ ಮಹಿಳಾ ಮೀಸ­­ಲಾತಿ ಮಸೂದೆ ಮತ್ತು ವಿದೇಶಿ ಬ್ಯಾಂಕು­­ಗಳಲ್ಲಿ ಇರುವ ಕಪ್ಪು ಹಣ ವಾ­ಪ­ಸ್‌­ ತರುವ ಭರವಸೆಗಳನ್ನು ಪ್ರಣಾ­ಳಿಕೆ­­ಯಲ್ಲಿ ವಿಶೇಷವಾಗಿ ಪ್ರಸ್ತಾಪಿಸ­ಲಾಗಿ­ದೆ­.

ತಮಿಳುನಾಡಿನ ಅಭಿವೃದ್ಧಿಯ ಜತೆಗೆ ಇಡೀ ದೇಶದ ಅಭಿವೃದ್ಧಿಯನ್ನು ಗಮನ­ದಲ್ಲಿ ಇಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧ­ಪಡಿಸಿರುವುದಾಗಿ ಪಕ್ಷದ ಪ್ರಧಾನ ಕಚೇರಿ­ಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತ ಮುಖ್ಯಮಂತ್ರಿ ಜಯಲಲಿತಾ ತಿಳಿಸಿದರು. ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳು ಮತ್ತು ಪುದುಚೇರಿಯ ಏಕೈಕ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ ಮಾರನೇ ದಿನವೇ ಪ್ರಣಾಳಿಕೆ­ಯನ್ನೂ ಬಿಡುಗಡೆ ಮಾಡಲಾಗಿದೆ.

ರಾಜ್ಯದ ಅಭಿವೃದ್ಧಿಯು ಕೇಂದ್ರ ಸರ್ಕಾರದ ಆರ್ಥಿಕ, ವಿದೇಶಾಂಗ ನೀತಿಗಳ ಮೇಲೆ ಅವಲಂಬಿಸಿ­ರುವುದರಿಂದ ಮುಂದಿನ ಸರ್ಕಾರದಲ್ಲಿ ಎಐಎಡಿ­ಎಂಕೆ ಮುಖ್ಯ ಪಾಲುದಾರ ಪಕ್ಷವಾಗುವುದು ಅಗತ್ಯ ಎಂದು ಜಯಾ ತಿಳಿಸಿದರು.

ಶ್ರೀಲಂಕಾದಲ್ಲಿ ತಮಿಳರ ಹಕ್ಕಿನ ರಕ್ಷಣೆಯೂ ಪ್ರಣಾಳಿಕೆಯಲ್ಲಿ ಪ್ರಸ್ತಾಪ­ವಾಗಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯ ರಚನೆಗೆ ಜನಮತಗಣನೆ ನಡೆಸು­ವಂತೆ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರುವ ಭರವಸೆಯನ್ನು  ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.