ನವದೆಹಲಿ (ಐಎಎನ್ಎಸ್): `ಆಸಿಡ್ ದಾಳಿಗೊಳಗಾಗಿ ಕೊನೆಯುಸಿರೆಳೆದ ಯುವತಿ ಕುಟುಂಬಕ್ಕೆ ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನೀಡಿರುವ ಪರಿಹಾರ ಅತ್ಯಲ್ಪವಾಗ್ದ್ದಿದು, ಇದು ಅತ್ಯಂತ ಅವಮಾನಕರ' ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸುಷ್ಮಾ, `ಸರ್ಕಾರ ನೀಡಿರುವ ರೂ. 2 ಲಕ್ಷ ಪರಿಹಾರ ಮೊತ್ತವು ದಾಳಿಯಿಂದ ಮೃತಪಟ್ಟ ಯುವತಿಗೆ ಮಾಡಿದ ಅವಮಾನ' ಎಂದಿದ್ದಾರೆ.
ನರ್ಸ್ ಹುದ್ದೆಗೆ ಸೇರಲು ಬಂದಿದ್ದ ಪ್ರೀತಿ ರತಿ (23) ಮೇಲೆ, ಮೇ 2ರಂದು ಇಲ್ಲಿನ ಬಾಂದ್ರಾ ರೈಲು ನಿಲ್ದಾಣದಲ್ಲಿ ಆಸಿಡ್ ದಾಳಿ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.