ADVERTISEMENT

ಆಸ್ತಿ ವಿವಾದ: ‘ಜಿಲ್ಲಾಧಿಕಾರಿಗೆ ನ್ಯಾಯ ನಿರ್ಣಯದ ಹಕ್ಕಿಲ್ಲ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಆಸ್ತಿ ವಿವಾದ: ‘ಜಿಲ್ಲಾಧಿಕಾರಿಗೆ ನ್ಯಾಯ ನಿರ್ಣಯದ ಹಕ್ಕಿಲ್ಲ’
ಆಸ್ತಿ ವಿವಾದ: ‘ಜಿಲ್ಲಾಧಿಕಾರಿಗೆ ನ್ಯಾಯ ನಿರ್ಣಯದ ಹಕ್ಕಿಲ್ಲ’   

ನವದೆಹಲಿ: ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿಯಲ್ಲಿ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಿಲ್ಲಾಧಿಕಾರಿ ಸೇರಿ ಸರ್ಕಾರದ ಆಡಳಿತ ನಿರ್ವಹಣೆಯ ಹೊಣೆ ಇರುವ ಅಧಿಕಾರಿಗಳಿಗೆ ಆಸ್ತಿ ವಿವಾದ ಪರಿಹರಿಸುವ ಅಧಿಕಾರ ಕೊಡುವುದು ಕಾನೂನು ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಜಿಲ್ಲಾಧಿಕಾರಿಯು ಸರ್ಕಾರದ ಅಧಿಕಾರಿ.  ಆಸ್ತಿ ವಿವಾದಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ನಿರ್ದಿಷ್ಟ ಅಧಿಕಾರ ಇದೆ ಎಂದು ಸ್ಪಷ್ಟವಾಗಿ ಕಾನೂನಿನಲ್ಲಿ ಉಲ್ಲೇಖವಿದ್ದರೆ ಮಾತ್ರ ಆ ಅಧಿಕಾರವನ್ನು ಚಲಾಯಿ ಸಬಹುದು ಎಂದು ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ಚಂದ್ರಚೂಡ ಅವರ ಪೀಠ ಅಭಿಪ್ರಾಯಪಟ್ಟಿದೆ.

ಹರಿದ್ವಾರದ ಕುಚಿಲಾಲ್‌ ರಾಮೇಶ್ವರ್‌ ಆಶ್ರಮ ಟ್ರಸ್ಟ್‌ಗೆ ಉತ್ತರಾಧಿಕಾರಿಗಳಿಲ್ಲ ಎಂಬ ಕಾರಣದಿಂದ ಟ್ರಸ್ಟ್‌ನ ಆಸ್ತಿಯನ್ನು ಹರಿದ್ವಾರದ ಜಿಲ್ಲಾಧಿಕಾರಿ ಸರ್ಕಾರದ ವಶಕ್ಕೆ ಪಡೆದಿದ್ದರು. ಈ ಆದೇಶವನ್ನು ಉತ್ತರಾಖಂಡ ಹೈಕೋರ್ಟ್‌ ಎತ್ತಿ ಹಿಡಿದಿತ್ತು. 2 ಆದೇಶಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.