ADVERTISEMENT

ಉಗ್ರರ ವಿರುದ್ಧ ಸೇನೆ, ಪೊಲೀಸ್‌ ಕಾರ್ಯಾಚರಣೆ: ಇಬ್ಬರು ಯೋಧರು, ಇಬ್ಬರು ನಾಗರಿಕರು ಮೃತ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 10:49 IST
Last Updated 1 ಏಪ್ರಿಲ್ 2018, 10:49 IST
ಸೇನಾಧಿಕರಿ ಎಕೆ ಭಟ್‌ ಮತ್ತು  ಡಿಜಿಪಿ ಎಸ್‌ಪಿ ವಾಯಿದ್‌ –ಫೋಟೊ ಕೃಪೆ:ಎಎನ್‌ಐ
ಸೇನಾಧಿಕರಿ ಎಕೆ ಭಟ್‌ ಮತ್ತು ಡಿಜಿಪಿ ಎಸ್‌ಪಿ ವಾಯಿದ್‌ –ಫೋಟೊ ಕೃಪೆ:ಎಎನ್‌ಐ   

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್‌ ಮತ್ತು ಲಷ್ಕರ್‌–ಎ–ತಯಬಾ(ಎಲ್‌ಇಟಿ) ಸಂಘಟನೆಗಳಿಗೆ ಸೇರಿದ ಎಂಟು ಉಗ್ರರು, ಭಾರತೀಯ ಸೇನೆಯ ಇಬ್ಬರು ಯೋಧರು ಹಾಗೂ ಇಬ್ಬರು ನಾಗರಿಕರು ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ ಮತ್ತು ಸೋಫಿಯಾನ್‌ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಮೂರು ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಯಿತು. ಸೋಫಿಯಾನ್‌ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

ದಕ್ಷಿಣ ಸೋಫಿಯಾನ್‌ನ ದ್ರಾಗದ್‌ ಮತ್ತು ಕಚ್‌ದೋರ ಪ್ರದೇಶದಲ್ಲಿ ಪ್ರತಿಭಟನಾ ನಿರತ ನಾಗರಿಕರು ಭದ್ರತಾ ಪಡೆ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾರೆ. ಇದೇ ವೇಳೆ ಹತ್ತಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ADVERTISEMENT

ಭಾರತೀಯ ಸೇನೆಯ ಲೆಫ್ಟಿನೆಂಟ್‌ ಉಮ್ಮರ್‌ ಫಯಾಜ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರು ಇದೇ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆ.

ಇಂದಿನ ಕಾರ್ಯಾಚರಣೆಯಲ್ಲಿ ಬಲಿಯಾದ ಎಲ್ಲ ಉಗ್ರರು ಸ್ಥಳೀಯರು ಎಂದು ಸೇನೆಯ ಅಧಿಕಾರಿ ಎಕೆ ಭಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.