ನವದೆಹಲಿ: ಭಾರಿ ಮಳೆ, ಸಿಡಿಲು, ದೂಳಿನ ಬಿರುಗಾಳಿಗೆ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳು ತತ್ತರಿಸಿವೆ. ಮುಂದಿನ 72 ಗಂಟೆಗಳವರೆಗೂ ಇದೇ ವಾತಾವರಣ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜಮ್ಮು– ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡಿಗಡ, ದೆಹಲಿ ಸೇರಿ ಹಲವೆಡೆ ತೀವ್ರವಾದ ಗಾಳಿ (50-70 ಕಿ.ಮೀ ವೇಗದಲ್ಲಿ) ಬೀಸಿದೆ. ಮನೆಯ ಗೋಡೆ ಕುಸಿದು ದೆಹಲಿಯ ಸೋಹೆಲ್ (18) ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.