ನವದೆಹಲಿ (ಪಿಟಿಐ): ಪೊಲೀಸ್ ಎನ್ಕೌಂಟರ್ನಲ್ಲಿ ಐವರು ಶಂಕಿತ ದರೋಡೆಕೋರರು ಮೃತಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಹಾಗೂ ಚೆನೈ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ಜಾರಿಮಾಡಿದೆ.
ಆಯೋಗದ ಮಾರ್ಗಸೂಚಿ ಮೇರೆಗೆ, ಮ್ಯಾಜಿಸ್ಟ್ರೇಟ್ ನಡೆಸಿದ ತನಿಖಾ ವರದಿ, ಹಾಗೂ ಮರಣೋತ್ತರ ಪರೀಕ್ಷಾ ವರದಿ ಮತ್ತು ವೈಯಕ್ತಿಕ ತನಿಖಾ ವಿವರದೊಂದಿಗೆ ನೋಟಿಸ್ಗೆ ಎಂಟು ವಾರಗಳಲ್ಲಿ ಉತ್ತರಿಸುವಂತೆ ಆಯೋಗ ನಿರ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.