ADVERTISEMENT

ಕನ್ನಯ್ಯಾಗೆ ನೀಡಿದ ಖಾಸಗಿ ಭದ್ರತೆ ರದ್ದು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 14:25 IST
Last Updated 8 ಆಗಸ್ಟ್ 2016, 14:25 IST
ಕನಯ್ಯಾ ಕುಮಾರ್
ಕನಯ್ಯಾ ಕುಮಾರ್   

ನವದೆಹಲಿ(ಪಿಟಿಐ): ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಯದಲ್ಲಿ ಅಲ್ಲಿನ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರಿಗೆ ಒದಗಿಸಿದ ಖಾಸಗಿ ಭಧ್ರತೆಯನ್ನು ಜೆಎನ್‌ಯು ಆಡಳಿತ ಮಂಡಳಿ ಹಿಂಪಡೆದಿದೆ.

 ಫೆ.9ರಂದು ದೆಹಲಿಯ ಜೆಎನ್‍ಯು ಆವರಣದಲ್ಲಿ ಸಂಸತ್ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಫ್ಜಲ್‌ ಗುರುವಿನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ದೇಶದ್ರೋಹ ಆರೋಪದ ಮೇಲೆ ಕನಯ್ಯಾ ಕುಮಾರ್ ಅವರು ಜೈಲು ಸೇರಿದ್ದರು.

ಕನಯ್ಯಾ ಕುಮಾರ್‌ಗೆ ದೆಹಲಿ ಹೈಕೋರ್ಟ್‌ ಆರು ತಿಂಗಳ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಈವರೆಗೂ ಕನ್ನಯ್ಯಾ ಅವರಿಗೆ ನೀಡಿದ ಖಾಸಗಿ ಭದ್ರತೆಗೆ 5 ಲಕ್ಷ ರೂಗಳು ವೆಚ್ಚ ಮಾಡಲಾಗಿದೆ ಎಂದು ಜೆಎನ್‌ಯುನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಯ್ಯಾ ಅವರ ಭದ್ರತೆಗೆ ಸಂಬಂಧಿಸಿದಂತೆ ಜೆಎನ್‌ಯು ಕುಲಪತಿ,  ಹಿರಿಯ ಭದ್ರತಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಒಬ್ಬ ವ್ಯಕ್ತಿಯ ಖಾಸಗಿ ಭದ್ರತೆಗಾಗಿ ಆಪಾರ ಪ್ರಮಾಣದ ಹಣವನ್ನು ವೆಚ್ಚ ಮಾಡಲು ವಿಶ್ವವಿದ್ಯಾಲಯ ಸಿದ್ಧವಿಲ್ಲ ಎಂದಿದ್ದಾರೆ.

ಕ್ಯಾಂಪಸ್‌ನಲ್ಲಿ ಯಾವುದೇ ಅಹಿತಕಾರ ಘಟನೆ ನಡೆಯಾದಂತೆ ನೋಡಿಕೊಳ್ಳಲು ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿದೆ. ಆದ್ದರಿಂದ ಕನ್ನಯಾ ಅವರಿಗೆ ಪ್ರತೇಕ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಪ್ರಸ್ತುತ ಕನ್ನಯಾ ಅವರಿಗೆ ದೆಹಲಿ ಹೈಕೋರ್ಟ್‌ ನಿರ್ದೇಶನದಂತೆ ದೆಹಲಿ ಪೊಲೀಸರ ಭದ್ರತೆಯನ್ನು ಕಲ್ಪಿಸಲಾಗಿದೆ. ಆದರೆ  ಕ್ಯಾಂಪಸ್‌ನಲ್ಲಿ ಪೊಲೀಸರ ಭದ್ರತೆ ಬೇಡ ಎಂದು ಕನ್ನಯಾ ಕುಮಾರ್‌ ವಿ ವಿ ಕುಲಪತಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.