ADVERTISEMENT

ಕಮಲ್‌ಹಾಸನ್‌ ನಿರ್ಧಾರಕ್ಕೆ ರಜನಿಕಾಂತ್‌ ಮೆಚ್ಚುಗೆ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ರಜನಿಕಾಂತ್
ರಜನಿಕಾಂತ್   

ಚೆನ್ನೈ : ‘ಸಮಕಾಲೀನ ನಟ ಕಮಲ್‌ಹಾಸನ್‌ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವುದನ್ನು ನಟ ರಜನಿಕಾಂತ್‌ ಸ್ವಾಗತಿಸಿದ್ದಾರೆ. ಅವರೊಬ್ಬ ಸಮರ್ಥ ವ್ಯಕ್ತಿಯಾಗಿದ್ದು, ರಾಜಕೀಯದಲ್ಲಿ ಜನರ ವಿಶ್ವಾಸವನ್ನು ಸಂಪಾದಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟ ಕಮಲ್ ಹಾಸನ್ ತಮ್ಮ ರಾಜಕೀಯ ಪಕ್ಷ ‘ಮಕ್ಕಳ್ ನೀದಿ ಮಯ್ಯಂ’ ಗೆ ಮದುರೆನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದ್ದರು.

‘ನನ್ನ ಮತ್ತು ಅವರ ಮಾರ್ಗಗಳು ಬೇರೆ ಬೇರೆಯಾಗಿರಬಹುದು. ಜನರಿಗೆ ಒಳಿತು ಮಾಡುವುದೇ ಇಬ್ಬರ ಗುರಿಯಾಗಿದೆ’ ಎಂದರು.

ADVERTISEMENT

‘ ಕಮಲ್‌ ಅವರು ಫೆ.21ರಂದು ಆಯೋಜಿಸಿದ್ದ ಸಾರ್ವಜನಿಕ ಸಭೆ ಅತ್ಯುತ್ತಮವಾಗಿತ್ತು. ಅವರ ರಾಜಕೀಯ ಯಾತ್ರೆಗೆ ನಾನು ಈಗಾಗಲೇ ಶುಭ ಹಾರೈಸಿದ್ದೇನೆ. ಮತ್ತೊಮ್ಮೆ ಅವರ ಪಕ್ಷಕ್ಕೆ ಶುಭವಾಗಲಿ’ ಎಂದರು.

ರಾಜಕೀಯ ಪಕ್ಷ ಸ್ಥಾಪನೆಗೂ ಮುನ್ನ ನಟ ರಜನಿಕಾಂರತ್‌, ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.