ಚೆನ್ನೈ (ಪಿಟಿಐ): ಪುದುಚೇರಿ ಮೂಲದ ಕಾರ್ಡಿನಲ್ ದೊರೈಸಾಮಿ ಸೈಮನ್ ಲೂರ್ದುಸಾಮಿ (90) ಅವರು ಸೋಮವಾರ ಬೆಳಿಗ್ಗೆ ರೋಮ್ನಲ್ಲಿ ಮೃತರಾದರು.
ಪಾರ್ಥಿವ ಶರೀರವನ್ನು ಚೆನ್ನೈಗೆ ತಂದು, ಅಲ್ಲಿಂದ ಪುದುಚೇರಿಗೆ ಕೊಂಡೊಯ್ಯಲಾಗುವುದು. ಪುದುಚೇರಿಯಲ್ಲಿ ಮಂಗಳವಾರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪುದುಚೇರಿಯಲ್ಲಿ, 1951ರಲ್ಲಿ ಪಾದ್ರಿಯಾಗಿ ತಮ್ಮ ಸೇವೆ ಆರಂಭಿಸಿದ ಅವರು 1985ರಲ್ಲಿ ಕಾರ್ಡಿನಲ್ ಪದವಿಗೇರಿದ್ದರು. ಲಿಬಿಯಾದಲ್ಲಿ ಟಿಟ್ಯುಲಾರ್ ಬಿಷಪ್ (ನಾಮಮಾತ್ರ ಬಿಷಪ್) ಆಗಿ ಸೇವೆ ಸಲ್ಲಿಸಿದ್ದ ಅವರು ಬೆಂಗಳೂರಿನ ಆರ್ಚ್ ಬಿಷಪ್ ಆಗಿಯೂ ಸೇವೆ ಸಲ್ಲಿಸಿದ್ದರು. ಭಾರತದಿಂದ ಕಾರ್ಡಿನಲ್ ಸ್ಥಾನಕ್ಕೇರಿದ ನಾಲ್ಕನೆಯವರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.