ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಿಂಗ್ಫಿಷರ್ ಏರ್ಲೈನ್ಸ್ ತನ್ನ ನೌಕರರಿಗೆ ಸಂಬಳ ಪಾವತಿಸದ ಹೊರತೂ ಅದಕ್ಕೆ ಹಾರಾಡಲು ಅನುಮತಿ ನೀಡುವುದಿಲ್ಲ ಎಂದು ಡಿಜಿಸಿಎ (ನಾಗರಿಕ ವಿಮಾನಯಾನದ ಮಹಾನಿರ್ದೇಶಕರು) ಹೇಳಿದ್ದು, ಈ ಸಂಬಂಧದ ಬಿಕ್ಕಟ್ಟು ಮುಂದುವರಿದಿದೆ.
ಡಿಜಿಸಿಎ ನಿರ್ಧಾರವನ್ನು ವಿಮಾನಯಾನ ಸಚಿವ ಅಜಿತ್ ಸಿಂಗ್ ಬೆಂಬಲಿಸಿದ್ದು, ಮುಷ್ಕರನಿರತ ಎಂಜಿನಿಯರ್ಗಳು ಹಾಗೂ ಆಡಳಿತ ಮಂಡಳಿ ನಡುವೆ ಮುಂಬೈನಲ್ಲಿ ಬುಧವಾರ ನಡೆದ ಮಾತುಕತೆ ಮುರಿದುಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.