ನವದೆಹಲಿ (ಪಿಟಿಐ): ಕಿಂಗ್ಫಿಷರ್ ವಿಮಾನ ಸಂಸ್ಥೆಗೆ ನೀಡಿದ್ದ ಹಾರಾಟ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಶನಿವಾರ ರದ್ದುಗೊಳಿಸಿದೆ.
ವಿಮಾನ ಹಾರಾಟವನ್ನು ಆರಂಭಿಸಲು ಕಿಂಗ್ಫಿಷರ್ ಯಾವುದೇ ಪರಿಣಾಮಕಾರಿ ಯೋಜನೆಯನ್ನು ರೂಪಿಸಿಲ್ಲ ಎಂದು ಹೇಳಿರುವ ಡಿಜಿಸಿಎ ಅದರ ಸಿಬ್ಬಂದಿ ವರ್ಗಕ್ಕೂ ವೇತನ ನೀಡಲು ಸ್ಪಷ್ಟವಾದ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾರಾಟ ಪರವಾನಗಿಯನ್ನು ರದ್ದುಪಡಿಸಿದೆ.
ಇದರಿಂದ ಮದ್ಯದ ದೊರೆ ಎಂದೇ ಹೆಸರಾದ ಕಿಂಗ್ಫಿಷರ್ ಮಾಲೀಕ ವಿಜಯ್ ಮಲ್ಯ ಭಾರಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.