ಹೈದರಾಬಾದ್(ಪಿಟಿಐ): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗ ರಾಜು ಹಾಗೂ ಮತ್ತೊಬ್ಬ ಆರೋಪಿ ಶುಕ್ರವಾರ ಇಲ್ಲಿನ ಕೋರ್ಟ್ಗೆ ಹಾಜರಾದರು.
ರಾಜು ಹಾಗೂ ಇತರ 212 ಆರೋಪಿಗಳು ಮತ್ತು 166 ಕಂಪೆನಿಗಳು ಕಾರ್ಪೊರೇಟ್ ಸೋಗಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾಗಿ ಜಾರಿ ನಿರ್ದೇಶನಾಲಯ ಕಳೆದ ವರ್ಷ ಅಕ್ಟೋಬರ್ನಲ್ಲಿ 21ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ದೂರು ದಾಖಲಿಸಿತ್ತು. 2009ರಲ್ಲಿ ಬಯಲಿಗೆ ಬಂದ ಈ ಹಗರಣ ಉದ್ಯಮ ವಲಯವನ್ನು ಬೆಚ್ಚಿ ಬೀಳಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣದ
ಆರೋಪಿಗಳ ವಿಚಾರಣೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯ ತನ್ನ ತನಿಖಾ ವರದಿಯಲ್ಲಿ ಹೇಳಿತ್ತು. ಜಾರಿ ನಿರ್ದೇಶನಾಲಯದ ಮನವಿಪರಿಶೀಲಿಸಿದ ಕೋರ್ಟ್, ಆರೋಪಿಗಳಿಗೆ ಶುಕ್ರವಾರ ಕೋರ್ಟ್ಗೆ ಹಾಜರಾಗುವಂತೆ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.