ವಾರಾಣಸಿ (ಪಿಟಿಐ): ಗಂಗಾ ನದಿಯಲ್ಲಿ ಬುಧವಾರ ಸಂಭವಿಸಿದ ದೋಣಿ ದುರಂತದಲ್ಲಿ 18 ಜನರು ಕಣ್ಮರೆಯಾಗಿದ್ದಾರೆ.
ಶೂಲಟಂಕೇಶ್ವರ್ ಪ್ರದೇಶದ ಬೇತಾವರ್ ಘಾಟ್ ಬಳಿ ನದಿಯಲ್ಲಿ ದೋಣಿ ಬುಡಮೇಲಾಯಿತು. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ 40 ಜನರ ಪೈಕಿ 22 ಜನರು ಈಜಿ ದಡ ಸೇರಿದರು. ದೋಣಿಯಲ್ಲಿದ್ದ ಬಹುತೇಕ ಜನರು ವಾರಾಣಸಿಯಲ್ಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮ ಮಿರ್ಜಾಪುರಕ್ಕೆ ಮರಳುತ್ತಿದ್ದರು. ನದಿಯಲ್ಲಿ ಭಾರಿ ನೀರಿನ ಸೆಳೆತ, ಪ್ರಬಲವಾದ ತೆರೆಗಳ ಹೊಡೆತಕ್ಕೆ ಸಿಲುಕಿ ದೋಣಿ ಬುಡ ಮೇಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.