ಅಯೋಧ್ಯೆ (ಐಎಎನ್ಎಸ್): ಲಖನೌದಲ್ಲಿ ಮಂಗಳವಾರ ತಮ್ಮ ಮೇಲೆ ಚಪ್ಪಲಿ ಎಸೆದ ಯುವಕನನ್ನು ಬಿಡುಗಡೆ ಮಾಡುವಂತೆ ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಆ ವ್ಯಕ್ತಿಯ ಬಗ್ಗೆ ನನಗೆ ಕೆಟ್ಟ ಅಭಿಪ್ರಾಯಗಳಿಲ್ಲ. ಈ ಕೆಲಸ ಮಾಡುವ ಮುಂಚೆ ಆತನ ಮನಸ್ಸಿನಲ್ಲಿ ಏನಿತ್ತೊ ನನಗೆ ಗೊತ್ತಿಲ್ಲ. ಆದರೆ ಯಾವುದಕ್ಕೂ ಹಿಂಸಾಚಾರವೇ ಮಾರ್ಗವಲ್ಲ; ಕುಳಿತು ಮಾತುಕತೆ ನಡೆಸಬೇಕು.
ಅವನು ಎಲ್ಲಿದ್ದಾನೋ ನನಗೆ ಗೊತ್ತಿಲ್ಲ. ಪೋಲಿಸ್ ವಶದಲ್ಲಿದ್ದರೆ ಅವನನ್ನು ಬಿಟ್ಟು ಬಿಡಿ ಮತ್ತು ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಹೇಳುತ್ತೇನೆ~ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.