ADVERTISEMENT

ಜಮ್ಮು– ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದ ಉದ್ರಿಕ್ತರ ಗುಂಪು

ಏಜೆನ್ಸೀಸ್
Published 23 ಜೂನ್ 2017, 7:48 IST
Last Updated 23 ಜೂನ್ 2017, 7:48 IST
ಡಿವೈಎಸ್ಪಿ ಮೊಹಮ್ಮದ್‌ ಆಯೂಬ್‌ ಪಂಡಿತ್‌
ಡಿವೈಎಸ್ಪಿ ಮೊಹಮ್ಮದ್‌ ಆಯೂಬ್‌ ಪಂಡಿತ್‌   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಜಾಮಿಯಾ ಮಸೀದಿಯ ಎದುರು ಗುರುವಾರ ರಾತ್ರಿ ನಡೆದ ಗಲಭೆಯಲ್ಲಿ ಉದ್ರಿಕ್ತರ ಗುಂಪು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರನ್ನು ಹೊಡೆದು ಕೊಂದಿದೆ.

ಡಿವೈಎಸ್ಪಿ ಮೊಹಮ್ಮದ್‌ ಆಯೂಬ್‌ ಪಂಡಿತ್‌ ಮೃತ ಪೊಲೀಸ್‌ ಅಧಿಕಾರಿ.

‘ಉದ್ರಿಕ್ತರ ಗುಂಪು ಆಯೂಬ್‌ ಅವರೊಂದಿಗೆ ಮಾತಿನ ಚಕಮಕಿ ನಡೆಸಿದೆ. ಗಲಭೆ ಹೆಚ್ಚಾದಾಗ ಆಯೂಬ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಜನರ ಗುಂಪು ನೌಹಟ್ಟಾ ಪ್ರದೇಶದ ಬಾಟಾ ಚೌಕದ ಬಳಿ ಅವರನ್ನು ಹೊಡೆದು ಕೊಂದಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.