ADVERTISEMENT

ಡಿಆರ್‌ಡಿಒಗೆ ಸೀತಾರಾಮನ್ ಕಿವಿಮಾತು

ಪಿಟಿಐ
Published 27 ನವೆಂಬರ್ 2018, 19:51 IST
Last Updated 27 ನವೆಂಬರ್ 2018, 19:51 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಆವಿಷ್ಕಾರದ ವಿಷಯದಲ್ಲಿ ಚುರುಕಾಗಿರಬೇಕು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಆವಿಷ್ಕಾರಗಳನ್ನುಕೈಗೊಳ್ಳಲು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರುವಂತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಅವರು ತಮ್ಮ ಸಚಿವಾಲಯಕ್ಕೆ ಕರೆ ನೀಡಿದ್ದಾರೆ.

ಬೌದ್ಧಿಕ ಸ್ವತ್ತುಗಳ ಹಕ್ಕು (ಐಪಿಆರ್) ಸಂಸ್ಕೃತಿ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವಾಲಯ ಆರಂಭಿಸಿರುವಮಿಷನ್ ರಕ್ಷಾ ಜ್ಞಾನಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.