ಹೈದರಾಬಾದ್(ಐಎಎನ್ಎಸ್): ಪಾಕಿಸ್ತಾನದ ಕರಾಚಿ ವಿಮಾನನಿಲ್ದಾಣ ದಲ್ಲಿ ಮಂಗಳವಾರ ರಾತ್ರಿ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳಿಂದ (ಎಟಿಸಿ) ನಡೆದ ಅಚಾತುರ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭಾರತೀಯ ವಿಮಾನ ನಿಲ್ದಾಣ ಗಳ ಪ್ರಾಧಿಕಾರದ ಅಧ್ಯಕ್ಷ ಅಲೋಕ್ ಸಿನ್ಹಾ ಹೇಳಿದ್ದಾರೆ.
ಈ ಘಟನೆಯನ್ನು ಪಾಕಿಸ್ತಾನ ಸರ್ಕಾರದ ಗಮನಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ತರಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಂಡನ್ ಹಾಗೂ ಮುಂಬೈ ನಡುವಿನ ಏರ್ ಇಂಡಿಯಾದ ವಿಮಾನಕ್ಕೆ ಕರಾಚಿಯ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳು ತಪ್ಪು ಸಂಕೇತ ನೀಡಿದ್ದರು. ಇದರಿಂದಾಗಿ ವಿಮಾನದ ದಾರಿ ಬದಲಾಗಿ ಅಪಘಾತವಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆಯಲಿಲ್ಲ.
ತಪ್ಪು ಸಂಕೇತ ನೀಡಿದ್ದರಿಂದ ವಿಮಾನದ ಪೈಲಟ್ಗೆ ಮುಂಬೈ ಎಟಿಸಿಗೆ ಸಂಪರ್ಕ ಸಾಧಿಸಲಾಗಲಿಲ್ಲ. ಆ ನಂತರ ವಿಮಾನ ಅಹಮದಾಬಾದ್ನ ಎಟಿಸಿಗೆ ಸಂಪರ್ಕ ಸಾಧಿಸಿ ಸರಿಯಾದ ಮಾರ್ಗ ಕಂಡುಕೊಂಡಿತು.
‘ಇದೊಂದು ತುಂಭಾ ಗಂಭೀರವಾದ ತಪ್ಪು. ಈ ರೀತಿಯ ಘಟನೆ ಹಿಂದೆ ಎಂದೂ ನಡೆದಿಲ್ಲ’ ಎಂದು ಅಲೋಕ್ ಹೇಳಿದರು.
‘ನಾವೀಗ ಈ ಘಟನೆಯನ್ನು ಯಾವ ರೀತಿ ಪರಿಶೀಲನೆ ನಡೆಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇವೆ. ಇದು ಮತ್ತೊಮ್ಮೆ ನಡೆಯಬಾರದು’ ಎಂದು ಅವರು ಹೇಳಿದರು.
ನಾಗರಿಕ ವಿಮಾನಯಾನ ಇಲಾಖೆ ಜಂಟಿ ಕಾರ್ಯದರ್ಶಿ ಜಿ.ಅಶೋಕ್್್್ ಬಾಬು ಮಾತನಾಡಿ, ಕರಾಚಿ ವಿಮಾನ ನಿಲ್ದಾಣದ ಎಟಿಸಿ ಅಧಿಕಾರಿಗಳು ವಿಮಾನ ಇಳಿಯುವ ವೇಳೆ ಯಾಕೆ ಖುಷಿಯಾಗಿದ್ದರು ಮತ್ತು ನಗುತ್ತಿದ್ದರು. ಯಾಕೆ ತಪ್ಪು ಸೂಚನೆ ನೀಡಿದ್ದಾರೆ ಎಂಬುದೂ ತಿಳಿದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.