ADVERTISEMENT

ತಮಿಳುನಾಡಿಗೆ ನಿತ್ಯವೂ 10 ಸಾವಿರ ಕ್ಯೂಸೆಕ್ ನೀರು: ಕರ್ನಾಟಕಕ್ಕೆ ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 15:23 IST
Last Updated 5 ಡಿಸೆಂಬರ್ 2012, 15:23 IST
ತಮಿಳುನಾಡಿಗೆ ನಿತ್ಯವೂ 10 ಸಾವಿರ ಕ್ಯೂಸೆಕ್ ನೀರು: ಕರ್ನಾಟಕಕ್ಕೆ ಸುಪ್ರೀಂ ಸೂಚನೆ
ತಮಿಳುನಾಡಿಗೆ ನಿತ್ಯವೂ 10 ಸಾವಿರ ಕ್ಯೂಸೆಕ್ ನೀರು: ಕರ್ನಾಟಕಕ್ಕೆ ಸುಪ್ರೀಂ ಸೂಚನೆ   

ನವದೆಹಲಿ (ಪಿಟಿಐ): ತಮಿಳುನಾಡಿಗೆ ನಿತ್ಯವೂ 10,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಕರ್ನಾಟಕ್ಕೆ ಬುಧವಾರ ನಿರ್ದೇಶನ ನೀಡಿದೆ.

ಅಲ್ಲದೇ, ಉಭಯ ರಾಜ್ಯಗಳಿಗೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಒಂದೆರಡು ದಿನಗಳಲ್ಲಿ ನಿರ್ಧರಿಸುವಂತೆ ಕಾವೇರಿ ನಿರ್ವಹಣಾ ಸಮಿತಿಗೆ (ಸಿಎಂಸಿ) ಸೂಚನೆ ನೀಡಿದೆ.

ನೀರಿನ ಕೊರತೆಯಿಂದ `ಸಾಂಬಾ' ಬೆಳೆ ಒಣಗುತ್ತಿದೆ. ಹಾಗಾಗಿ ಕರ್ನಾಟಕದಿಂದ ಹೆಚ್ಚುವರಿಯಾಗಿ ಕಾವೇರಿ ನೀರು ಬಿಡುಗಡೆಗೆ ಆಗ್ರಹಿಸಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಮನವಿಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.