ADVERTISEMENT

ತಾಜ್‌ಮಹಲ್ ವಿರೂಪಗೊಳಿಸಿದ ಚಿತ್ರ ಪ್ರಕಟ:ಬಂಧನ

ಪಿಟಿಐ
Published 30 ಅಕ್ಟೋಬರ್ 2017, 19:40 IST
Last Updated 30 ಅಕ್ಟೋಬರ್ 2017, 19:40 IST

ಲಖನೌ: ತಾಜ್‌ಮಹಲ್ ಜತೆಗೆ ಕೇಸರಿ ಧ್ವಜಗಳನ್ನು ಸೇರಿಸಿ ವಿರೂಪಗೊಳಿಸಿರುವ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಕ್ಕಾಗಿ ರಾಷ್ಟ್ರ ನಿರ್ಮಾಣ ಸೇನಾ ಪಕ್ಷದ ಅಧ್ಯಕ್ಷ ಅಮಿತ್ ಜಾನಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 3ರಂದು ತಾಜ್‌ಮಹಲ್‌ನಲ್ಲಿ ಶಿವನ ಪೂಜೆ ಮಾಡಲು ಬರುವಂತೆ ಕಾರ್ಯಕರ್ತರಿಗೆ ಜಾನಿ ಕರೆ ನೀಡಿದ್ದರು. ಇದಾದ ಬಳಿಕ ಅವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು.

ಆಗ್ರಾದ ಮಾಲ್ ಅವೆನ್ಯುದಲ್ಲಿ ಜಾನಿ ಹಾಗೂ ಅವರ ಸ್ನೇಹಿತರನ್ನು ಬಂಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.