ಜೈಪುರ: ರಾಜಸ್ಥಾನದ 8ನೇ ತರಗತಿಗಾಗಿ ಮುದ್ರಿಸಿರುವ ಪುಸ್ತಕವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರನ್ನು ‘ಭಯೋತ್ಪಾದನೆಯ ಪಿತಾಮಹ’ ಎಂದು ಸಂಬೋಧಿಸಲಾಗಿದೆ.
ಮಥುರಾ ಮೂಲದ ಸ್ಟುಡೆಂಡ್ ಅಡ್ವೈಸರ್ ಪಬ್ಲಿಕೇಷನ್ ಎಂಬ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದ್ದು, ಇಂಗ್ಲಿಷ್ ಮಾಧ್ಯಮ ಶಾಲೆಗಳು ಈ ಪುಸ್ತಕವನ್ನು ಬಳಸುತ್ತಿವೆ.
‘ಸ್ವಾತಂತ್ರ್ಯ ಹೋರಾಟಕ್ಕೆ ತಿಲಕ್ ದಾರಿಯನ್ನು ತೋರಿಸಿಕೊಟ್ಟರು. ಹೀಗಾಗಿ ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಕರೆಯಲಾಗುತ್ತದೆ’ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶನ ಸಂಸ್ಥೆಯ ಅಧಿಕಾರಿ ರಾಜ್ಪಾಲ್ ಸಿಂಗ್, ‘ಇದು ಭಾಷಾಂತರಕಾರರಿಂದ ಆಗಿರುವ ಪ್ರಮಾದ. ಇದು ನಮ್ಮ ಗಮನಕ್ಕೂ ಬಂದಿದ್ದು, ಪರಿಷ್ಕೃತ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.