ADVERTISEMENT

ತುಟ್ಟಿ ಭತ್ಯೆ ಏರಿಕೆ ನಿರ್ಧಾರ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ(ಡಿ.ಎ)ಯನ್ನು ಈಗಿರುವ ಶೇ 72 ರಿಂದ 80ಕ್ಕೆ ಏರಿಸುವ ನಿರ್ಧಾರವನ್ನು  ಸರ್ಕಾರ ಮಂಗಳವಾರ ಮುಂದೂಡಿದೆ.

ತುಟ್ಟಿ ಭತ್ಯೆ ಏರಿಕೆಯಾದಲ್ಲಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 30ಲಕ್ಷ ಪಿಂಚಣಿದಾರರು ಇದರ ಫಲಾನುಭವಿಗಳಾಗಲಿದ್ದರು.
`ಸಂಪುಟ ಸಭೆಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಗೈರು ಹಾಜರಿಯಿಂದಾಗಿ ಈ ಪ್ರಸ್ತಾವನೆ ಮುಂದೂಡಲಾಗಿದೆ'  ಎಂದು ಸಚಿವ ಮನಿಷ್ ತಿವಾರಿ  ತಿಳಿಸಿದ್ದಾರೆ. ಸಚಿವ ಪಿ. ಚಿದಂಬರಂ ಅವರು ಸದ್ಯ ಜಪಾನ್ ದೇಶದ ಪ್ರವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.