ತೆರಿಗೆ ಪಾವತಿಗೆ ನೋಟಿಸ್
ಕೊಚ್ಚಿ (ಪಿಟಿಐ): ಎರಡು ವರ್ಷಗಳ ಬಾಕಿ ತೆರಿಗೆ ಹಣ ಪಾವತಿಸುವಂತೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಮುಖ್ಯಸ್ಥ ಕೆ.ಜಿ. ಬಾಲಕೃಷ್ಣ ಅವರ ಮಗಳು ಹಾಗೂ ಅಳಿಯನಿಗೆ ತೆರಿಗೆ ಇಲಾಖೆ ನೋಟಿಸ್ಕಳುಹಿಸಿದೆ.
ಮಗಳು ಕೆ.ಬಿ.ಸೋನಿ, ಅಳಿಯ ವಿ.ಸಿ.ಶ್ರೀನಿಜನ್, 2001-08 ಹಾಗೂ 2009-10ರ ತೆರಿಗೆ ಪಾವತಿ ಹಣವನ್ನು ಬಾಕಿ ಉಳಿಸಿದ್ದು, ಅವರಿಗೆ ನೋಟಿಸ್ ತಲುಪಿದ ಬಳಿಕ ಇಲಾಖೆಯಿಂದ ವಿಚಾರಣೆಗೆ ಕಳುಹಿಸಲಾಗುವುದು ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಪಂಚಾಯತ್ ಕಾರ್ಯದರ್ಶಿ ಹತ್ಯೆ
ರಾಯಗಡ (ಪಿಟಿಐ): ನಕ್ಸಲ್ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂಬ ಸಂಶಯದಿಂದ ಪಂಚಾಯತ್ ಕಾರ್ಯದರ್ಶಿಯೊಬ್ಬನನ್ನು ನಕ್ಸಲರು ಹತ್ಯೆ ಮಾಡಿರುವ ಘಟನೆ ರಾಯಗಡ ಜಿಲ್ಲೆಯ ಕರ್ಣಿಪಾಲ್ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.