ADVERTISEMENT

ತ್ರಿಪುರಾದಲ್ಲಿ ಗೋಮಾಂಸ ನಿಷೇಧವಿಲ್ಲ ಎಂದ ಬಿಜೆಪಿ ನಾಯಕ

ಏಜೆನ್ಸೀಸ್
Published 14 ಮಾರ್ಚ್ 2018, 6:20 IST
Last Updated 14 ಮಾರ್ಚ್ 2018, 6:20 IST
ಸುನಿಲ್ ದೇವ್‌ಧರ್ (ಸಂಗ್ರಹ ಚಿತ್ರ)
ಸುನಿಲ್ ದೇವ್‌ಧರ್ (ಸಂಗ್ರಹ ಚಿತ್ರ)   

ನವದೆಹಲಿ: ತ್ರಿಪುರಾದಲ್ಲಿ ಗೋಮಾಂಸ ನಿಷೇಧಿಸುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಸುನಿಲ್ ದೇವ್‌ಧರ್ ಹೇಳಿದ್ದಾರೆ.

‘ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗೋಮಾಂಸ ಸೇವನೆಗೆ ವಿರುದ್ಧವಾಗಿದ್ದರೆ ಅದನ್ನು ನಿಷೇಧಿಸುವ ಸಾಧ್ಯತೆ ಇದೆ. ಆದರೆ, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನವರು ಗೋಮಾಂಸ ಸೇವನೆ ಮಾಡುವುದರಿಂದ ಸರ್ಕಾರ ಅಲ್ಲಿ ಗೋಮಾಂಸ ನಿಷೇಧಿಸದು’ ಎಂದು ಸುನಿಲ್ ಹೇಳಿದ್ದಾರೆ.

‘ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತರು, ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ವಲ್ಪ ಮಟ್ಟಿಗೆ ಹಿಂದೂಗಳೂ ಇದ್ದು, ಅವರೂ ಮಾಂಸ ಸೇವನೆ ಮಾಡುತ್ತಾರೆ. ಹೀಗಾಗಿ ಇಲ್ಲಿ ಗೋಮಾಂಸ ನಿಷೇಧಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ತ್ರಿಪುರಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸುನಿಲ್ ಅವರು ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.