ADVERTISEMENT

ದಾವೂದ್‌, ಎಲ್‌ಇಟಿ ನಡುವೆ ನಂಟು

ಉಗ್ರ ಕರೀಂ ತುಂಡಾ ಬಿಚ್ಚಿಟ್ಟ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ಭೂಗತಪಾತಕಿ ದಾವೂದ್‌ ಇಬ್ರಾಹಿಂ, ಲಷ್ಕರ್‌–ಎ–ತೈಯ­ಬಾ (ಎಲ್‌ಇಟಿ), ಇಂಡಿಯನ್ ಮುಜಾಹಿದೀನ್‌(ಐಎಂ) ಹಾಗೂ ಬಬ್ಬರ್‌ ಖಲ್ಸಾ ಇಂಟರ್‌ ನ್ಯಾಷನಲ್‌ (ಬಿಕೆಐ)  ನಡುವೆ ಸಂಪರ್ಕವಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.  ಅಬ್ದುಲ್‌ ಕರೀಂ ತುಂಡಾ ವಿಚಾರಣೆಯಿಂದ ಈ ಸ್ಫೋಟಕ ಮಾಹಿತಿ ಹೊರಬಂದಿದೆ.

ತುಂಡಾ ವಿರುದ್ಧ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿ ದಾಖಲಿಸಿದ್ದು, ತುಂಡಾ 2002ರಲ್ಲಿ ಪಾಕಿಸ್ತಾನದಲ್ಲಿ ಬಿಕೆಐ ಮೂಲಕ ದಾವೂದ್‌ನನ್ನು ಭೇಟಿಯಾಗಿದ್ದಾನೆ. ಈ ವೇಳೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಕುರಿತು ಚರ್ಚೆ ನಡೆಸಿದ್ದಾನೆ ಎಂದು ಹೇಳಿದ್ದಾರೆ. 

2002ರಲ್ಲಿ ತುಂಡಾ, ದಾವೂದ್‌ನನ್ನು ಕರಾಚಿಯ ಆತನ ಮನೆಯಲ್ಲಿ ಸಂಪರ್ಕಿಸಿದ್ದಾನೆ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಭರತ್‌ ಪರಾಶರ್‌ ಅವರಿಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.