
ಪ್ರಜಾವಾಣಿ ವಾರ್ತೆನವದೆಹಲಿ, (ಪಿಟಿಐ): ದೆಹಲಿ ಮತ್ತು ಸುತ್ತಮುತ್ತಲ ಉಪನಗರಗಳಲ್ಲಿ ಸೋಮವಾರ ಮಧ್ಯಾಹ್ನ ಭೂಮಿ ಕಂಪಿಸಿದ್ದು , ಭೀತರಾದ ಜನ ತಮ್ಮ ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಗೋಡಿ ಬಂದ ಘಟನೆ ನಡೆದಿದೆ.
ಹರಿಯಾಣಾದ ಬಹಾದ್ದೂರ್ ಗಡ್ ದಲ್ಲಿ ಈ ಭೂಕಂಪನದ ಕೇಂದ್ರವಿತ್ತು. ಭೂಮಿಯು ಆಳದಲ್ಲಿ 9 ಕಿ.ಮೀ ಕೆಳಗೆ ಕಂಪಿಸಿದ್ದು, ಒಟ್ಟು 9 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ದಾಖಲಾಗಿದೆಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ, ಘಾಜಿಯಾಬಾದ್ ಮತ್ತು ಉತ್ತರಪ್ರದೇಶದ ನೋಯಿಡಾಗಳಲ್ಲಿ ಸೋಮವಾರ ಮಧ್ಯಾಹ್ನ 1.11 ಗಂಟೆಗೆ ಭೂಮಿ ಕಂಪಿಸಿದೆ. ಈ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.9ರಷ್ಟು ಪ್ರಮಾಣದಲ್ಲಿ ಇದ್ದುದು ದಾಖಲೆಯಾಗಿದೆ.
ಇದುವರೆಗೆ ಈ ಭೂಕಂಪದಿಂದ ಯಾವುದೇ ಬಗೆಯ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಜಖಂಗೊಂಡ ಬಗ್ಗೆ ವರದಿಗಳು ಬಂದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.