ADVERTISEMENT

ದೆಹಲಿ ಮತ್ತು ಸುತ್ತಮುತ್ತ ಕಂಪಿಸಿದ ಭೂಮಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 8:05 IST
Last Updated 5 ಮಾರ್ಚ್ 2012, 8:05 IST

ನವದೆಹಲಿ, (ಪಿಟಿಐ): ದೆಹಲಿ ಮತ್ತು ಸುತ್ತಮುತ್ತಲ ಉಪನಗರಗಳಲ್ಲಿ ಸೋಮವಾರ ಮಧ್ಯಾಹ್ನ ಭೂಮಿ ಕಂಪಿಸಿದ್ದು , ಭೀತರಾದ ಜನ  ತಮ್ಮ ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಗೋಡಿ ಬಂದ ಘಟನೆ ನಡೆದಿದೆ.

ಹರಿಯಾಣಾದ ಬಹಾದ್ದೂರ್ ಗಡ್ ದಲ್ಲಿ ಈ ಭೂಕಂಪನದ ಕೇಂದ್ರವಿತ್ತು. ಭೂಮಿಯು ಆಳದಲ್ಲಿ 9 ಕಿ.ಮೀ ಕೆಳಗೆ ಕಂಪಿಸಿದ್ದು, ಒಟ್ಟು 9 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ದಾಖಲಾಗಿದೆಎಂದು ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿ, ಘಾಜಿಯಾಬಾದ್ ಮತ್ತು ಉತ್ತರಪ್ರದೇಶದ ನೋಯಿಡಾಗಳಲ್ಲಿ ಸೋಮವಾರ ಮಧ್ಯಾಹ್ನ 1.11 ಗಂಟೆಗೆ ಭೂಮಿ ಕಂಪಿಸಿದೆ. ಈ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.9ರಷ್ಟು ಪ್ರಮಾಣದಲ್ಲಿ ಇದ್ದುದು ದಾಖಲೆಯಾಗಿದೆ.

ADVERTISEMENT

ಇದುವರೆಗೆ ಈ ಭೂಕಂಪದಿಂದ ಯಾವುದೇ ಬಗೆಯ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಜಖಂಗೊಂಡ ಬಗ್ಗೆ  ವರದಿಗಳು ಬಂದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.