ADVERTISEMENT

ಪುನರ್‌ವಿಂಗಡಣೆಗೆ ಒತ್ತಾಯ

ಕೊಡಗು, ಕಾರೈಕಲ್ ರಾಜ್ಯಗಳ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಪುದುಚೆರಿ (ಪಿಟಿಐ): ದೇಶದ ವಿವಿಧೆಡೆ ಕೇಳಿಬಂದಿರುವ ಹೊಸ ರಾಜ್ಯಗಳ ರಚನೆ ಬೇಡಿಕೆಯ ಹಿನ್ನೆಲೆಯಲ್ಲಿ ಎರಡನೇ ರಾಜ್ಯಗಳ ಪುನರ್‌ವಿಂಗಡಣಾ ಆಯೋಗ (ಎಸ್‌ಆರ್‌ಸಿ) ರಚಿಸುವಂತೆ ಇಲ್ಲಿನ ಕಾರೈಕಲ್ ಹೋರಾಟ ಸಂಘಟನೆ (ಕೆಎಸ್‌ಜಿ) ಕೇಂದ್ರವನ್ನು ಒತ್ತಾಯಿಸಿದೆ.

ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಕೊಡಗು, ವಿದರ್ಭ, ಕಾರೈಕಲ್ ಮುಂತಾದ ದಕ್ಷಿಣ ಭಾರತ ಪ್ರಾಂತ್ಯಗಳ ಹೋರಾಟ ಸಂಘಟನೆಗಳು ಎಸ್‌ಆರ್‌ಸಿಗಾಗಿ ಜಂಟಿ ಹೇಳಿಕೆ ನೀಡುವುದಾಗಿ ಕೆಎಸ್‌ಜಿ ಸಂಚಾಲಕ ಎಸ್.ಪಿ. ಸೆಲ್ವಷಣ್ಮುಗಂ ತಿಳಿಸಿದ್ದಾರೆ.

ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆಗೆ ಸಂಬಂಧಿಸಿದಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಮುಖ್ಯಸ್ಥ ಎನ್.ಯು. ನಾಚಪ್ಪ ಅವರೊಡನೆ ಜಂಟಿ ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.