ದೂರದೃಷ್ಟಿಯ ಬಜೆಟ್
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೂರದೃಷ್ಟಿಯಿಂದ ಕೂಡಿದ ಪ್ರಗತಿಪರವಾದ ಬಜೆಟ್್ ಮಂಡಿಸಿದ್ದಾರೆ.
ಇದು ಸ್ಪಷ್ಟ ಮುನ್ನೋಟವನ್ನು ಒಳಗೊಂಡ ವಾಸ್ತವಾಂಶದಿಂದ ಕೂಡಿದ ಬಜೆಟ್.
ಈ ಬಾರಿಯ ಬಜೆಟ್ ಹೂಡಿಕೆ ಸ್ನೇಹಿಯಾಗಿದೆ. ತೆರಿಗೆಗೆ ಸಂಬಂಧಿಸಿದ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದೆ. ಸ್ಥಿರವಾದ, ದೂರದೃಷ್ಟಿಯಿಂದ ಕೂಡಿದ, ನ್ಯಾಯಸಮ್ಮತವಾದ ತೆರಿಗೆ ಪದ್ಧತಿಯ ಬಗ್ಗೆ ಹೂಡಿಕೆದಾರರಲ್ಲಿ ಭರವಸೆ ಮೂಡಿಸುತ್ತದೆ.
೨೦೨೨ರೊಳಗೆ ಸರ್ವರಿಗೂ ಸೂರು, ಉದ್ಯೋಗ, ಆರೋಗ್ಯ, ಶಿಕ್ಷಣ ಹಾಗೂ ಸಂಪೂರ್ಣ ವಿದ್ಯುದೀಕರಣದ ಗುರಿಯನ್ನು ಸಾಧಿಸಲು ಸಂಕಲ್ಪ ಮಾಡಲಾಗಿದೆ. ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುವುದಕ್ಕೆ ಹೊಸ ಕಾನೂನಿನ ಪ್ರಸ್ತಾವ ಕೂಡ ಬಜೆಟ್ನಲ್ಲಿದೆ.
–ನರೇಂದ್ರ ಮೋದಿ, ಪ್ರಧಾನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.