ಮುಂಬೈ (ಪಿಟಿಐ): ಬಾಲಿವುಡ್ ಮತ್ತು ಫ್ಯಾಷನ್ ಲೋಕದ ಹೆಸರಾಂತ ಛಾಯಾಗ್ರಾಹಕ ಗೌತಮ್ ರಾಜಾಧ್ಯಕ್ಷ (62) ತೀವ್ರ ಹೃದಯಾಘಾತದಿಂದ ಮಂಗಳವಾರ ತಮ್ಮ ಇಲ್ಲಿನ ನಿವಾಸದಲ್ಲಿ ನಿಧನರಾದರು.
ಗೌತಮ್ ತೆಗೆದ ಛಾಯಾಚಿತ್ರಗಳಿಂದ ಮಾಧುರಿ ದಿಕ್ಷೀತ್ ಸೇರಿದಂತೆ ಹಲವರು ಬಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣವಾಯಿತು.
ಗೌತಮ್ ಖ್ಯಾತ ಲೇಖಕಿ ಶೋಭಾ ಡೇ ಅವರ ಸಹೋದರ. `ಗೌತಮ್ ಅವರ ಫೋಟೋಗ್ರಫಿ ಶೈಲಿ ಅನನ್ಯ ಮತ್ತು ಕಲಾತ್ಮಕವಾಗಿತ್ತು. ಅದನ್ನು ಯಾವುದಕ್ಕೂ ಹೋಲಿಸಲಿಕ್ಕಾಗದು~ ಎಂದು ಶೋಭಾ ಡೇ ಹೇಳಿದ್ದಾರೆ.
`ರಾಜಾಧ್ಯಕ್ಷ ಛಾಯಾಗ್ರಾಹಕ ಆಗಿದ್ದಲ್ಲದೇ ಉತ್ತಮ ಗಾಯಕ ಕೂಡ ಆಗಿದ್ದರು. ಸಂಗೀತದ ಕುರಿತು ನನ್ನೊಂದಿಗೆ ಚರ್ಚಿಸುತ್ತಿದ್ದ ಅವರು, ಫೋಟೋಗ್ರಫಿ ಬಗ್ಗೆ ಹೇಳಿಕೊಡುತ್ತಿದ್ದರು ~ ಎಂದು ಲತಾ ಮಂಗೇಶ್ಕರ್ ನೆನಪಿಸಿಕೊಂಡಿದ್ದಾರೆ.
ಕರಣ್ ಜೋಹರ್, ಮಧುರ್ ಭಂಡಾರಕರ್, ಬೊಮನ್ ಇರಾನಿ, ಶ್ರೇಯಾ ಘೋಷಾಲ್ಅವರು ಗೌತಮ್ ಅವರ ಮನೆಗೆ ತೆರಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.