ಜೋಧಪುರ, (ಪಿಟಿಐ): ಭಂವರಿ ದೇವಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮಹತ್ವದ ಮುನ್ನಡೆ ಸಾಧಿಸಿದ್ದು, ಆಕೆಯ ಶವವನ್ನು ದಹಿಸಿದ್ದಾನೆ ಎನ್ನಲಾದ ಆರೋಪಿ ಕೈಲಾಶ್ ಜಾಖರ್ನನ್ನು ಬಂಧಿಸಿದೆ.
ಜೋಧಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದರಿಂದ ಜಾಖರ್ನನ್ನು ಬಂಧಿಸಲಾಯಿತು. ಆತನ ಸುಳಿವು ನೀಡಿದವರಿಗೆ ಸಿಬಿಐ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.