ಹೈದರಾಬಾದ್: ತೆಲಂಗಾಣ ಮಸೂದೆಯ ಪ್ರತಿಗಳಿಗೆ ಬೆಂಕಿ ಹಚ್ಚಿದ ಸೀಮಾಂಧ್ರ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಮತ್ತು ಈ ಸಂಬಂಧ ತನಿಖೆ ನಡೆಸಿ ವಿಸ್ತೃತವಾದ ವರದಿ ಸಲ್ಲಿಸಬೇಕೆಂದು ಇಲ್ಲಿನ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ಸೂಚಿಸಿದೆ.
ನ್ಯಾಯಾಲಯದ ಸೂಚನೆ ಅನ್ವಯ, ಸೆಕ್ಷನ್ 153(ಎ) ಮತ್ತು (ಬಿ) ಹಾಗೂ ಸೆಕ್ಷನ್ 3 ಮತ್ತು 4ರ ಸಾರ್ವಜನಿಕ ಆಸ್ತಿ ನಾಶ ಕಾಯ್ದೆ ಪ್ರಕಾರ, ಶಾಸಕರಾದ ಧುಲಿಪಾಲಾ ನರೇಂದ್ರ ಚೌಧರಿ, ದೇವಿನೇನಿ ಉಮಾ ಮಹೇಶ್ವರ್ ರಾವ್ ಮತ್ತು ವಿಧಾನ ಪರಿಷತ್ ಸದಸ್ಯ ಸತೀಶ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಾಸಕರ ವರ್ತನೆಯಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದೂ ದೂರಿನಲ್ಲಿ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.