ADVERTISEMENT

ಮುಖ್ಯಮಂತ್ರಿಯನ್ನು ಡೆಂಗಿ ಸೊಳ್ಳೆಗೆ ಹೋಲಿಸಿ ವ್ಯಂಗ್ಯ

ಪಿಟಿಐ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಮುಖ್ಯಮಂತ್ರಿಯನ್ನು ಡೆಂಗಿ ಸೊಳ್ಳೆಗೆ ಹೋಲಿಸಿ ವ್ಯಂಗ್ಯ
ಮುಖ್ಯಮಂತ್ರಿಯನ್ನು ಡೆಂಗಿ ಸೊಳ್ಳೆಗೆ ಹೋಲಿಸಿ ವ್ಯಂಗ್ಯ   

ಚೆನ್ನೈ: ತಮಿಳುನಾಡಿನಲ್ಲಿ ಡೆಂಗಿ ಜ್ವರದಿಂದ ಸಾವು ಸಂಭವಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷ ಡಿಎಂಕೆ, ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರನ್ನು ಡೆಂಗಿ ಸೊಳ್ಳೆಗಳಂತೆ ವ್ಯಂಗ್ಯಚಿತ್ರ ರಚಿಸಿ ಟೀಕಿಸಿದೆ.

ಡಿಎಂಕೆಯ ಮುಖವಾಣಿ ‘ಮುರಸೋಳಿ’ ಪತ್ರಿಕೆಯಲ್ಲಿ, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ.ಪನ್ನೀರ ಸೆಲ್ವಂ ಅವರನ್ನು ಸೊಳ್ಳೆಗಳ ರೀತಿ ಚಿತ್ರಿಸಿ ಮೊದಲ ಪುಟದಲ್ಲಿ ಪ್ರಕಟಿಸಿದೆ. ಇವರಿಬ್ಬರನ್ನು ದ್ರೋಹಿಗಳು ಎಂದು ಜರಿಯಲಾಗಿದೆ. ಇದೇ ವ್ಯಂಗ್ಯಚಿತ್ರವನ್ನು ವಾಟ್ಸ್‌ಆ್ಯಪ್‌ಗಳಲ್ಲಿ ಹರಿಯಬಿಡಲಾಗಿದೆ.

ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್‌ ಅವರ ಹೆಸರನ್ನು ಡೆಂಗಿ ಎಂದೂ, ಪಳನಿಸ್ವಾಮಿ ಸರ್ಕಾರವನ್ನು ಡೆಂಗಿ ಆಡಳಿತ ಎಂದು ವ್ಯಂಗ್ಯ ಮಾಡಲಾಗಿದೆ.

ADVERTISEMENT

ಡಿಎಂಕೆ‌ ಈ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದೆ ಎಂದು ಪಳನಿಸ್ವಾಮಿ ಟೀಕಿಸಿದ್ದಾರೆ. ಡೆಂಗಿ ಜ್ವರವನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ‘ನೀಲವೆಂಬು ಕದಿನೀರ್’ (ಕಹಿಬೇವಿನಿಂದ ತಯಾರಿಸಿದ ಸಾಂಪ್ರದಾಯಿಕ ಔಷಧಿ) ವಿತರಣೆ ಮತ್ತು ಡೆಂಗಿ ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವಾಗ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಮತ್ತು ಕೆ. ದಿನಕರನ್‌ ಅವರು ಟೀಕಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.