ADVERTISEMENT

ಮುಜಾಫರ್‌ನಗರ ಶಾಂತ, ಕರ್ಫ್ಯೂ ಸಡಿಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ಲಖನೌ(ಐಎಎನ್‌ಎಸ್‌): ಕೋಮು­­ಗಲಭೆಯಿಂದ ನಲುಗಿದ್ದ ಮಜಾಫರ್‌­ನಗರ ಮತ್ತು ಸುತ್ತ­ಮುತ್ತಲ ಪ್ರದೇಶ  ಶಾಂತವಾ­ಗಿದ್ದು, ಶನಿವಾರ  ಬೆಳಿಗ್ಗೆ 7ರಿಂದ ಸಂಜೆ 7 ಗಂಟೆ ವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು ಎಂದು ಅಧಿಕಾ­ರಿಗಳು ತಿಳಿಸಿದ್ದಾರೆ. ಇನ್ನೂ ಬಿಗುವಿನ ವಾತಾವ­ರಣದಿಂದ ಕೂಡಿರುವ ಗ್ರಾಮೀಣ ಭಾಗಗದ ಕೆಲ­ವೆಡೆ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿ­ಸಿವೆ. ಶುಕ್ರವಾರ ಕೂಡ 12 ತಾಸುಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.

40 ಸಾವಿರ ಜನರು ನಿರಾಶ­್ರಿತರಾಗಿ­ದ್ದಾರೆ. ನಿರಾಶ್ರಿತರಿಗೆ ಮುಜಾಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ತೆರೆದಿರುವ 30 ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.