ADVERTISEMENT

ಮೂವರಿಗೆ ಕೀರ್ತಿ ಚಕ್ರ, ಹತ್ತು ಮಂದಿಗೆ ಶೌರ್ಯ ಚಕ್ರ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ):  ನೌಕಾ­ಯಾ­ನ ಮೂಲಕ ವಿಶ್ವ ಪರ್ಯಟನೆ ಮಾಡಿದ ನೌಕಾಪಡೆ ಅಧಿಕಾರಿ ಅಭಿಲಾಷ್‌ ಟೋಮಿ ಮತ್ತು ಕಾಶ್ಮೀರದಲ್ಲಿ  ನಡೆದ ಪ್ರತ್ಯೇಕ ಕಾರ್ಯಾ­ಚರಣೆ­ಗಳಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ಸಾಹಸ ಮೆರೆದ ಪಂಜಾಬ್‌ ರೆಜಿ­ಮೆಂಟ್‌ನ ಮೇಜರ್‌ ಮಹೇಶ್‌ ಕುಮಾರ್‌ ಸೇರಿದಂತೆ ಮೂವರಿಗೆ  ಶುಕ್ರ­ವಾರ ಇಲ್ಲಿ  ‘ಕೀರ್ತಿ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉತ್ತರಾಖಂಡ ಪ್ರವಾಹ ಸಂತ್ರಸ್ತ­ರನ್ನು ರಕ್ಷಿಸುತ್ತಿದ್ದಾಗ ಮೃತಪಟ್ಟ ವಾಯು­­ಪಡೆ ಅಧಿಕಾರಿ ಡೆರಿಲ್‌ ಕ್ಯಾಸ್ಟೆಲಿನೊ ಅವ­ರಿಗೆ ಮರಣೋ­ತ್ತ­ರ­ವಾಗಿ ಪ್ರಶಸ್ತಿ ನೀಡಲಾಯಿತು.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು 10 ಮಂದಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಿದರು. ಅಸ್ಸಾಂ­ನಲ್ಲಿ ನಡೆದ ಅಪಘಾತದಲ್ಲಿ ತಮ್ಮ ಮೂವರು ಸಹೋದ್ಯೋಗಿಗಳನ್ನು ಕಾಪಾ­ಡುವಾಗ ಮೃತಪಟ್ಟ ಗಡಿ ರಸ್ತೆ ಸಂಸ್ಥೆಯ ಸಿವಿಲ್‌ ಎಂಜಿನಿಯರ್‌ ಮನಿಷ್‌, ಅಸ್ಸಾಂನ ದಿನ್‌ಜಾನ್‌ ಗ್ರಾಮದ ಮನೆಯೊಂದರಲ್ಲಿ ಹೊತ್ತಿ­ಕೊಂಡ ಬೆಂಕಿ ಆರಿಸುವಾಗ ಅಸು­ನೀಗಿದ ವಾಯುಪಡೆ ಯೋಧ ಮುರಳಿ ಕಣ್ಣನ್‌ ಅವರಿಗೆ ಮರಣೋ­ತ್ತರ­ವಾಗಿ ಶೌರ್ಯ ಚಕ್ರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.