ADVERTISEMENT

ಮೋದಿಗೆ ತ್ರಿಕೂಟದ ಅಡ್ಡಗಾಲು- ಠಾಕ್ರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ):  ಆರ್‌ಎಸ್‌ಎಸ್, ಗಡ್ಕರಿ ಮತ್ತು ಅಡ್ವಾಣಿ ಅವರ ಕೂಟ ನರೇಂದ್ರ ಮೋದಿ ಅವರಿಗೆ ತೊಡರುಗಾಲು ಹಾಕುತ್ತಿದೆ ಎಂದು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಟೀಕಿಸಿದ್ದಾರೆ.

ಶನಿವಾರ ನವದೆಹಲಿಯಲ್ಲಿ ಮುಕ್ತಾಯವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ನರೇಂದ್ರ ಮೋದಿ ಹಾಜರಾಗದಿರಲು ಅಡ್ವಾಣಿ ಜತೆಗಿನ ಭಿನ್ನಮತವೇ ಕಾರಣ ಎಂಬ ವಿಶ್ಲೇಷಣೆ ದಟ್ಟವಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಠಾಕ್ರೆ ಪಕ್ಷದ ಮುಖವಾಣಿ `ಸಾಮ್ನಾ~ದ ಸಂಪಾದಕೀಯದಲ್ಲಿ ಹೀಗೆ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.