ಹೈದರಾಬಾದ್: ಸಿಪಿಎಂನ ಮುಂದಿನ ಮೂರು ವರ್ಷಗಳ ರಾಜಕೀಯ ನಿಲುವು ಮತ್ತು ಕಾರ್ಯತಂತ್ರಗಳನ್ನು ನಿಗದಿಪಡಿಸುವ ಅಧಿವೇಶನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ತಮ್ಮ ನಿಲುವನ್ನು ಮಂಡಿಸದಂತೆ ತಡೆಯಲಾಗಿದೆ.
ಯೆಚೂರಿ ಬದಲಿಗೆ ಪಕ್ಷದ ರಾಜಕೀಯ ಕಾರ್ಯತಂತ್ರಗಳ ಕರಡನ್ನು ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮಂಡಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು, ಕಾಂಗ್ರೆಸ್ ಸೇರಿದಂತೆ ಪ್ರಜಾಸತ್ತಾತ್ಮಕ ನಿಲುವು ಹೊಂದಿರುವ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಯೆಚೂರಿ ಅವರ ನಿಲುವಾಗಿತ್ತು. ಪ್ರಕಾಶ್ ಕಾರಟ್ ಅವರ ಬಣ ಯೆಚೂರಿಯವರ ನಿಲುವನ್ನು ವಿರೋಧಿಸಿತ್ತು. ಹೀಗಾಗಿಯೇ ಅವರು ತಮ್ಮ ಕರಡನ್ನು ಮಂಡಿಸದಂತೆ ತಡೆಯಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.