ನವದೆಹಲಿ: ಲಷ್ಕರ್ ಎ ತಯಬಾ ಉಗ್ರ ಮೊಹಮ್ಮದ್ ಅಮೀರ್ ಅವಾನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಇಲ್ಲಿನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಉದ್ದೇಶದಿಂದ ಈತ ಪಾಕಿಸ್ತಾನದಿಂದ ಭಾರತಕ್ಕೆ ಒಳನುಸುಳಿ ಬಂದಿದ್ದಾನೆ ಎಂದು ಎನ್ಐಎ ಆರೋಪಿಸಿದೆ.
ಅಮೀರ್ನನ್ನು ಕಳೆದ ನವೆಂಬರ್ 24ರಂದು ಉತ್ತರ ಕಾಶ್ಮೀರದ ಹಂದ್ವಾರಾ ಪ್ರದೇಶದಿಂದ ಸೇನೆ ಬಂಧಿಸಿತ್ತು.
‘ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಅಮೀರ್ ಭಾರತಕ್ಕೆ ನುಸುಳಿದ್ದ. ಇತರ ಮೂವರು ಈತನ ಜೊತೆಗಿದ್ದರು’ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.