
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಗ್ರಹದ ಉದ್ದೇಶಿತ ಕಾನೂನಿನ ‘ತತ್ವಗಳು ಮತ್ತು ಉದ್ದೇಶಗಳ’ ರೂಪುರೇಷೆ ನೀಡುವ ಎರಡು ಕರಡುಪ್ರತಿಗಳನ್ನು ಲೋಕಪಾಲ ಮಸೂದೆಯ ಜಂಟಿ ಕರಡು ರಚನಾ ಸಮಿತಿಯ ನಾಗರಿಕ ಸಮಿತಿ ಸದಸ್ಯರು ಸೋಮವಾರ ಸರ್ಕಾರಕ್ಕೆ ಸಲ್ಲಿಸಿದರು.
ಕರಡು ರಚನೆಯನ್ನು ಜೂನ್ 30ರೊಳಗೆ ಅಂತಿಮಗೊಳಿಸಲು ಜಂಟಿ ಸಮಿತಿ ಸಭೆಯನ್ನು ಮೇ 7, 23 ಮತ್ತು 30ರಂದು ನಡೆಸಲು ಹಾಗೂ ಜೂನ್ ತಿಂಗಳಲ್ಲಿ ಅಗತ್ಯವಾದರೆ ನಿತ್ಯವೂ ಸಭೆ ನಡೆಸಲು ಸಮಿತಿ ಒಪ್ಪಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.