ಗುರುಗ್ರಾಮ: ಕೆಲಸದಿಂದ ವಜಾ ಮಾಡಿದ್ದರಿಂದ ಆಕ್ರೋಶಗೊಂಡ ನೌಕರನೊಬ್ಬ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥನ ಮೇಲೆ ಗುರುವಾರ ಗುಂಡಿನ ದಾಳಿ ನಡೆಸಿದ್ದಾರೆ.
ಮನೆಸಾರ್ನಲ್ಲಿರುವ ಜಪಾನ್ ಮೂಲದ ಮಿಟ್ಸುಬಿಶಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಬೀನೇಶ್ ಶರ್ಮಾ ಅವರಿಗೆ ಗುಂಡು ತಗಲಿದ್ದು, ಇಲ್ಲಿನ ರಾಕ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಜಾಗೊಂಡಿರುವ ನೌಕರ ಜೋಗಿಂದರ್ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಶರ್ಮಾ ತಮ್ಮ ಕಾರಿನಲ್ಲಿ ಹೊರಟಿದ್ದ ವೇಳೆ ಬೈಕ್ನಲ್ಲಿ ತನ್ನ ಸಹಚರನೊಂದಿಗೆ ಜೋಗಿಂದರ್ ಹಿಂಬಾಲಿಸಿದ್ದಾನೆ. ಕಾರಿನ ಸನಿಹ ಬೈಕ್ ಬಂದಾಗ ಶರ್ಮಾ ಕಾರನ್ನು ವೇಗವಾಗಿ ಓಡಿಸಿದ್ದಾರೆ. ಆಗ ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿ ಶರ್ಮಾರತ್ತ ಗುಂಡು ಹಾರಿಸಿದ್ದಾನೆ’ ಎಂದು ಗುರುಗ್ರಾಮ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಂದರ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.