ADVERTISEMENT

ವಿಮಾನನಿಲ್ದಾಣಕ್ಕೆ ಛತ್ರಪತಿ ಹೆಸರಿಡಲು ಶಿಫಾರಸು

ಪಿಟಿಐ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ಮುಂಬೈ: ಕೊಲ್ಹಾಪುರ ವಿಮಾನನಿಲ್ದಾಣಕ್ಕೆ ‘ಛತ್ರಪತಿ ರಾಜಾರಾಮ್‌ ಮಹಾರಾಜ್‌’ ವಿಮಾನ ನಿಲ್ದಾಣವೆಂದು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮಹಾರಾಷ್ಟ್ರ ವಿಧಾನಸಭೆ ತೀರ್ಮಾನಿಸಿದೆ.

ಈ ಕುರಿತು  ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮಂಡಿಸಿದ ನಿರ್ಣಯವನ್ನು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.

ಕೊಲ್ಹಾಪುರ ವಿಮಾನನಿಲ್ದಾಣದ ಹೆಸರು ಮರುನಾಮಕರಣ ವಿಚಾರ ಜಿಲ್ಲೆಯ ಜನರು ಮತ್ತು ನಾಯಕರ ಹಲವು ವರ್ಷಗಳ ಬೇಡಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.