ಮುಂಬೈ: ಕೊಲ್ಹಾಪುರ ವಿಮಾನನಿಲ್ದಾಣಕ್ಕೆ ‘ಛತ್ರಪತಿ ರಾಜಾರಾಮ್ ಮಹಾರಾಜ್’ ವಿಮಾನ ನಿಲ್ದಾಣವೆಂದು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮಹಾರಾಷ್ಟ್ರ ವಿಧಾನಸಭೆ ತೀರ್ಮಾನಿಸಿದೆ.
ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಡಿಸಿದ ನಿರ್ಣಯವನ್ನು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.
ಕೊಲ್ಹಾಪುರ ವಿಮಾನನಿಲ್ದಾಣದ ಹೆಸರು ಮರುನಾಮಕರಣ ವಿಚಾರ ಜಿಲ್ಲೆಯ ಜನರು ಮತ್ತು ನಾಯಕರ ಹಲವು ವರ್ಷಗಳ ಬೇಡಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.