ADVERTISEMENT

ವೆಂಬ್ಲೆ ಸಂಗೀತೋತ್ಸವ: ಹಿಂದಿ ಸಂಗೀತ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಎ.ಆರ್‌. ರೆಹಮಾನ್‌

ಏಜೆನ್ಸೀಸ್
Published 14 ಜುಲೈ 2017, 19:15 IST
Last Updated 14 ಜುಲೈ 2017, 19:15 IST
ಎ.ಆರ್‌ ರೆಹಮಾನ್‌
ಎ.ಆರ್‌ ರೆಹಮಾನ್‌   

ಮುಂಬೈ: ಬಾಲಿವುಡ್‌ನ ಪ್ರಸಿದ್ಧ ಸಂಗೀತಗಾರ ಎ.ಆರ್‌. ರೆಹಮಾನ್‌ ಹಿಂದಿ ಸಂಗೀತ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಹೌದು, ಇತ್ತೀಚೆಗೆ(ಜೂನ್‌ 8) ಇಂಗ್ಲೆಂಡ್‌ನ ವೆಂಬ್ಲೆಯಲ್ಲಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಎ.ಆರ್‌. ರೆಹಮಾನ್‌ ಅವರು ತಮಿಳು ಹಾಡುಗಳನ್ನೇ ಹೆಚ್ಚಾಗಿ ಹಾಡಿದ್ದು, ಇದೀಗ ಹಿಂದಿ ಸಂಗೀತ ಅಭಿಮಾನಿಗಳು ರಹಮಾನ್‌ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಕರ್‌ ಪ್ರಶಸ್ತಿ ವಿಜೇತ ಎ.ಆರ್‌. ರೆಹಮಾನ್‌ ಅವರ ಹಿಂದಿ ಹಾಡುಗಳಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಹಿಂದಿ ಹಾಡುಗಳಿಗಿಂತ ತಮಿಳು ಹಾಡುಗಳನ್ನು ಹೆಚ್ಚಾಗಿ ಹಾಡಿರುವುದು ಇದೀಗ ಹಿಂದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.