ರಾಯಪುರ (ಐಎಎನ್ಎಸ್): ಸರ್ಕಾರ ನಡೆಸುವ ಖ್ಯಾತ ಆರೋಗ್ಯ ಶಿಬಿರದಲ್ಲಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕನಿಷ್ಠ 11 ಮಂದಿ ದೃಷ್ಟಿ ಕಳೆದುಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ.
`ಶಸ್ತ್ರಚಿಕಿತ್ಸೆ ವೇಳೆ ತೋರಿದ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ರೀನಾ ಬಾಬಾಸಾಹೇಬ ಕಾಂಗಲೆ ತಿಳಿಸಿದ್ದಾರೆ. ದುರ್ಗಾ ಜಿಲ್ಲೆ ಬಲೋಡ್ನಲ್ಲಿ ಸೆ. 30ರಂದು ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಈ ಶಿಬಿರದಲ್ಲಿ ಸುಮಾರು 50 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.