
ಪ್ರಜಾವಾಣಿ ವಾರ್ತೆರಾಯಪುರ (ಐಎಎನ್ಎಸ್): ಸರ್ಕಾರ ನಡೆಸುವ ಖ್ಯಾತ ಆರೋಗ್ಯ ಶಿಬಿರದಲ್ಲಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕನಿಷ್ಠ 11 ಮಂದಿ ದೃಷ್ಟಿ ಕಳೆದುಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ.
`ಶಸ್ತ್ರಚಿಕಿತ್ಸೆ ವೇಳೆ ತೋರಿದ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ರೀನಾ ಬಾಬಾಸಾಹೇಬ ಕಾಂಗಲೆ ತಿಳಿಸಿದ್ದಾರೆ. ದುರ್ಗಾ ಜಿಲ್ಲೆ ಬಲೋಡ್ನಲ್ಲಿ ಸೆ. 30ರಂದು ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಈ ಶಿಬಿರದಲ್ಲಿ ಸುಮಾರು 50 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.