ADVERTISEMENT

ಶಿಕ್ಷೆಗೆ ತಡೆ: ಕರ್ಣನ್‌ ಅರ್ಜಿ ಮತ್ತೆ ತಿರಸ್ಕೃತ

ಪಿಟಿಐ
Published 7 ಜೂನ್ 2017, 19:25 IST
Last Updated 7 ಜೂನ್ 2017, 19:25 IST
ಶಿಕ್ಷೆಗೆ ತಡೆ: ಕರ್ಣನ್‌ ಅರ್ಜಿ ಮತ್ತೆ ತಿರಸ್ಕೃತ
ಶಿಕ್ಷೆಗೆ ತಡೆ: ಕರ್ಣನ್‌ ಅರ್ಜಿ ಮತ್ತೆ ತಿರಸ್ಕೃತ   

ನವದೆಹಲಿ: ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಧಿಸಲಾಗಿರುವ ಆರು ತಿಂಗಳು ಜೈಲು ಶಿಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಮೇ 9ರಂದು ಶಿಕ್ಷೆ ವಿಧಿಸಲಾಗಿದ್ದು ಬಳಿಕ ಕರ್ಣನ್‌ ಅವರು ತಲೆಮರೆಸಿಕೊಂಡಿದ್ದಾರೆ.

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ದೀಪಕ್‌ ಗುಪ್ತಾ ಅವರ ರಜಾಕಾಲದ ಪೀಠಕ್ಕೆ ಕರ್ಣನ್‌ ಅವರ ವಕೀಲ ಮ್ಯಾಥ್ಯೂ ಜೆ. ನೆಡುಂಪಾರ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಪೀಠ ನಿರಾಕರಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.