ADVERTISEMENT

ಶ್ರೀನಗರ: ಉಗ್ರರ ದಾಳಿ, ಎಂಟು ಯೋಧರ ಹತ್ಯೆ, 19 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 15:02 IST
Last Updated 24 ಜೂನ್ 2013, 15:02 IST
ಶ್ರೀನಗರ: ಉಗ್ರರ ದಾಳಿ, ಎಂಟು ಯೋಧರ ಹತ್ಯೆ, 19 ಮಂದಿಗೆ ಗಾಯ
ಶ್ರೀನಗರ: ಉಗ್ರರ ದಾಳಿ, ಎಂಟು ಯೋಧರ ಹತ್ಯೆ, 19 ಮಂದಿಗೆ ಗಾಯ   

ಶ್ರೀನಗರ (ಏಜೆನ್ಸೀಸ್): ಶ್ರೀನಗರದ ಹೊರವಲಯ ಬೇಮಿನಾ ಬಳಿ ಸೋಮವಾರ ಸೇನಾ ಬೆಂಗಾವಲು ಪಡೆಯ ಮೇಲೆ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಎಂಟು  ಸೈನಿಕರು ಹತರಾಗಿ, 19 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಸ್ತೆಯ ಇಕ್ಕೆಲಗಳಿಂದಲೂ ಸೇನಾ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ಬೆನ್ನಲ್ಲೇ ಪ್ರದೇಶವನ್ನು ಸುತ್ತುವರಿದ ಸೇನೆ ಉಗ್ರರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಶ್ಮೀರ ಕಣಿವೆ ಭೇಟಿಗಿಂತ ಒಂದು ದಿನ ಮುಂಚಿತವಾಗಿ ಈ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಉಗ್ರಗಾಮಿಗಳಿಂದ ನಡೆದ ಎರಡನೇ ದಾಳಿ ಇದು ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.