ಇಂಫಾಲ (ಪಿಟಿಐ): ಮಣಿಪುರದ ಆರೋಗ್ಯ ಸಚಿವ ಎಲ್.ಜಯಂತ ಕುಮಾರ್ ಅವರ ಪಶ್ಚಿಮ ಇಂಫಾಲ ಜಿಲ್ಲೆಯಲ್ಲಿನ ಮನೆಯ ಮೇಲೆ ಉಗ್ರರು ಶನಿವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ.
ಇದರಿಂದ ಮನೆಯ ಸಮೀಪ ನಿಂತಿದ್ದ ಮೆಮ್ಚಾ ದೇವಿ ಎಂಬ ಮಹಿಳೆ ಗಾಯಗೊಂಡು, ಎರಡು ವಾಹನಗಳು ಹಾನಿಗೊಳಗಾಗಿವೆ ಎಂದು ಮೂಲಗಳು ತಿಳಿಸಿವೆ. ಸಚಿವರು ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದಾಗ ಈ ಘಟನೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.