ನವದೆಹಲಿ: ಸಿಬಿಎಸ್ಇ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ದೆಹಲಿ ಪೊಲೀಸರು ಶನಿವಾರ ಹಿಮಾಚಲ ಪ್ರದೇಶದ ಮೂವರನ್ನು ಬಂಧಿಸಿದ್ದಾರೆ.
ಹಿಮಾಚಲ ಪ್ರದೇಶದ ಊನಾ ಜಿಲ್ಲೆಯ ಡಿಎವಿ ಶಾಲೆಯ ಅರ್ಥಶಾಸ್ತ್ರ ಶಿಕ್ಷಕ ರಾಕೇಶ್ ಕುಮಾರ್, ಗುಮಾಸ್ತ ಅಮಿತ್ ಹಾಗೂ ಪರಿಚಾರಕ ಅಶೋಕ್ ಬಂಧಿತ ಆರೋಪಿಗಳು.
ಊನಾದಿಂದ ಇವರನ್ನು ದೆಹಲಿಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಯಿತು ಎಂದು ದೆಹಲಿ ವಿಶೇಷ ಆಯುಕ್ತ (ಅಪರಾಧ) ಆರ್.ಪಿ. ಉಪಾಧ್ಯಾಯ ತಿಳಿಸಿದ್ದಾರೆ. ಸಿಬಿಎಸ್ಇ ಪರೀಕ್ಷಾ ಕೇಂದ್ರವಾಗಿದ್ದ ಊನಾದ ಜವಾಹರ ನವೋದರ ಶಾಲೆಯಲ್ಲಿ ರಾಕೇಶ್ ಕುಮಾರ್ ಮೇಲ್ವಿಚಾರಕರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.